Slide
Slide
Slide
previous arrow
next arrow

ಮೇ. 28ಕ್ಕೆ ನಾದಶ್ರೀ ಕಲಾಕೇಂದ್ರದ ವಾರ್ಷಿಕೋತ್ಸವ

300x250 AD

ಕುಮಟಾ: ರೋಟರಿ ಸರ್ವೀಸ್ ಸೊಸೈಟಿ (ರಿ) ಪ್ರವರ್ತಿತ ನಾದಶ್ರೀ ಕಲಾಕೇಂದ್ರದ ವಾರ್ಷಿಕೋತ್ಸವ ಮೇ. 28ರ ಬೆಳಿಗ್ಗೆ 9.45ಕ್ಕೆ ನಾದಶ್ರೀ ಕಲಾಕೇಂದ್ರದಲ್ಲಿ ನಡೆಯಲಿದ್ದು, ಸಮಾರಂಭವನ್ನು ಪ್ರಗತಿ ಪಿಯು ಕಾಲೇಜು ಮೂರೂರಿನ ಪ್ರಾಚಾರ್ಯರಾದ ಪ್ರೊ.ಗಜಾನನ ಎಂ.ಭಟ್ ಉದ್ಘಾಟಿಸಲಿದ್ದಾರೆ.

ರೋಟರಿ ಸರ್ವೀಸ್ ಸೊಸೈಟಿಯ ಅಧ್ಯಕ್ಷರಾದ ಅರುಣ ಉಭಯಕರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿ ಕಲಾವಿದರಾಗಿ ಕು.ಸಂಗೀತಾ ನಾಯ್ಕ ಹಡಿನಬಾಳ, ಶಿರಸಿಯ ಅಜಯ ಹೆಗಡೆ, ಬಾಬಾ ಪ್ರಹ್ಲಾದ ಎಂ.ಪೈ ಅವರನ್ನೊಳಗೊಂಡ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಅಂದೇ ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಚೇತನ ಶೇಟ್ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಎಂ.ಪಿ.ಇ.ಸೊಸೈಟಿ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ ಆಗಮಿಸಲಿದ್ದಾರೆ.

300x250 AD

ಅಲ್ಲದೇ 10 ಪರಿಣಿತ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ ಭರತನಾಟ್ಯ ಪ್ರಸ್ತುತಿಗಳು ನಡೆಯಲಿದ್ದು, ಸಂಗೀತ-ನಾಟ್ಯಾಸಕ್ತರು, ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ರೋಟರಿ ಸರ್ವೀಸ್ ಸೊಸೈಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Share This
300x250 AD
300x250 AD
300x250 AD
Back to top